Monday 23 April 2012

ಹೊಸ ಹುಟ್ಟು !


ಏಳು ಘಂಟೆ.. ಹೊಸಾ ಕೆಲಸಕ್ಕೆ ಬೇಗ ಬಂದಿದ್ದೇ ಮ್ಯಾನೇಜರ್ ಮುಗುಳ್ನಕ್ಕ. ಹೋಗಪ್ಪಾ ರೂಂ ನಂಬರ್ 203ಕ್ಕೆ ಒಂದು ಲೀಟರ್ ನೀರು ಕೊಟ್ಟು ಬಾ ಎಂದ ಮಾತಿಗೆ ತಲೆಯಾಡಿಸಿ ಲಿಫ್ಟ್ ಹತ್ತಿ ಹೊರಟ.

ಹುಂ ಹುಂ.. ಬಿಸಿನೆತ್ತರಿಗೆ ಆದ ತಪ್ಪಿಗೆ ಹುಟ್ಟುವ ಪಿಂಡ, ಓ ದೇವರೇ ಮಾಡಿಸು ಗರ್ಭಾಪಾತ ! ಇಲ್ಲವಾದರೆ ಮತ್ತೊಂದು ನನ್ನಂತ ಅನರ್ಥ ಬೀಜ ಹುಟ್ಟೀತು..

ಅಬ್ಬಾ .. ಒಮ್ಮೆಲೇ ಕೋಪ ನೆತ್ತಿಗೇರಿತು. ಮೊನ್ನೆ ತಾನೇ ಎಂ ಎಲ್ ಎ ಪಕ್ಕದಲ್ಲಿ ನಿಂತ ಫೋಟೋ ಪೇಪರಿನಲ್ಲಿ ಬಂದ ಕ್ಷಣದಿಂದ ಅರ್ಧ ಸಮಾಜ ಸುಧಾರಕನಾಗಿದ್ದ ನಾನು ಈ ರೀತಿಯ ಕೆಟ್ಟ ಕೆಲಸವನ್ನು ತಡೆಯದೇ ಬಿಡಲಾದೀತೇ ?. ಭ್ರೂಣ ಹತ್ಯೆ ಮಹಾಪಾಪ. ಹುಟ್ಟುವ ಮಗು ಹೇಗೇ ಇರಲಿ, ಅದನ್ನ ಚಿವುಟಿ ಹಾಕುವ ಈ ದ್ರೋಹಿಗಳನ್ನ ಇಂತಹ ಹೋಟೆಲ್ಗಳು ಪೋಷಿಸುತ್ತದೆಯೇ ? ಒಳ್ಳೆಯದಾಯಿತು ನನ್ನನ್ನು ಇಲ್ಲಿ ಸೇರಿಸಿದ್ದು. ಈಗಲೇ ಹೋಗಿ ತಡೆಯಬೇಕು.

ಅವನ ಮೈ ಉರಿಯತೊಡಗಿಸಿತು. ಅವನೇ ಅವನಲ್ಲಿ ಪ್ರೇರೇಪಿಸಿದ್ದ ಸಮಾಜ ಸುಧಾರಕ ಎದ್ದೆದ್ದು ಕುಣಿಯತೊಡಗಿದ. ಬಾಗಿಲು ಒಡೆದು ಒಳನುಗ್ಗುವ ಸಿನಿಮೀಯ ಆಲೋಚನೆ ಬಂದರೂ ಆಗುವುದಿಲ್ಲ ಎಂದುಕೊಂಡ. ಬಾಗಿಲು ತೆರೆದು ವಿಚಾರಿಸಿಕೊಂಡರಾಯಿತು ಅಷ್ಟೇ .

ಟಕ್ ಟಕ್ ಟಕ್ !
ಒಬ್ಬ ತೆಳ್ಲಗಿನ ಮನುಷ್ಯ ಬಾಗಿಲು ತೆರೆದ. ಇವನ ಬಾಯಿ ಒಣಗಿತು. ನೀರೂಊ ಎಂದ. ಸರಿ ಒಳಗೆ ಬಾರಪ್ಪ ಎಂದನವನು.
ಇನ್ನೊಂದು ಹೆಣ್ಣು ಜೀವಕ್ಕಾಗಿ ಹುಡುಕತೊಡಗಿದ ಇವನು. ಕೇಳಿದ ತಡೆಯಲಾರದೆ , ಯಾರಲ್ಲಿ ಮಾತನಾಡುತ್ತಿದ್ದಿರಿ ಭ್ರೂಣ ಹತ್ಯೆಯ ಬಗ್ಗೆ ?

ಓಹೋ , ಹಾಗೇನಿಲ್ಲ, ನಾನು ಸಣ್ಣ ಕವಿ.. ನಾಳೆಯ ಕವನ ವಾಚನಕ್ಕಾಗಿ ಹೊಸತೊಂದನ್ನ ರಚಿಸುತ್ತಾ ಇದ್ದೇನೆ ..

ಬಿಸಿನೆತ್ತರಿಗೆ ಆದ ತಪ್ಪಿಗೆ ಹುಟ್ಟುವ ಪಿಂಡ,
ಓ ದೇವರೇ ಮಾಡಿಸು ಗರ್ಭಾಪಾತ !
ಇಲ್ಲವಾದರೆ ಮತ್ತೊಂದು ನನ್ನಂತ ಅನರ್ಥ ಬೀಜ ಹುಟ್ಟೀತು..

ಹೇಗಿದೆ ಸಾಲುಗಳು ?

3 comments:

  1. ಬಿಸಿನೆತ್ತರಿಗೆ ಆದ ತಪ್ಪಿಗೆ ಹುಟ್ಟುವ ಪಿಂಡ,
    ಓ ದೇವರೇ ಮಾಡಿಸು ಗರ್ಭಾಪಾತ !
    ಇಲ್ಲವಾದರೆ ಮತ್ತೊಂದು ನನ್ನಂತ ಅನರ್ಥ ಬೀಜ ಹುಟ್ಟೀತು..
    Nice story kirana ...well said:)

    ReplyDelete
  2. ಚೆಂದಿದ್ದೋ.. ಆ ಕವಿ ನಿಮ್ಮ ನೆಂಟ್ರಾ ಹೆಂಗೆ ? :D :D
    ಚೆಂದದ ಕತೆ

    ReplyDelete
  3. ಕಡೆಯ ಸಾಲುಗಳು ಅದ್ಭುತವಾಗಿವೆ ಭಟ್ಟರೇ...

    ReplyDelete